Wednesday, October 14, 2009

ನಗೆಯು ಬರುತಿದೆ!ನಮಗೆ ನಗೆಯು ಬರುತಿದೆ !


ಬಹಳ ಹಿಂದೆ ನಾನು ಮಂಡ್ಯ ಜಿಲ್ಲೆಯ ಮದ್ದೂರ್ ತಾಲೂಕಿನ ಕೊಕ್ಕರೆ ಬೆಳ್ಳೂರಿಗೆ ಹೋದಾಗ ಸಿಕ್ಕ ಈ ಹೆಜ್ವಾರ್ಲೆಗಳು [ಪೆಲಿಕಾನ್]  ನನ್ನನ್ನು ನೋಡಿ ನಗಲಾರಂಬಿಸಿದವು! ಹತ್ತಿರ ಹೋಗಿ  ನೋಡಿದರೆ ಅವುಗಳ ಮಾತು ಕೇಳಿಬಂತು!ಒಂದು ಹೇಳ್ತು  ನೋಡು ಈಗ ತಾನೇ ತಮಾಷೆಗೆ  ಹೇಳ್ತಿತಿದ್ಯಲ್ಲ  ಮಾನವರು ತುಂಬಾ ಒಳ್ಳೆಯವರು ಎಂದು ! ಬಂದ ನೋಡು  ನಮ್ ಫೋಟೋ ತೆಗದುಎಲ್ಲಕಡೆ ಹಂಚಿ  ನಮ್ಮ ಜೀವನ ಹರಾಜು ಹಾಕಿ ಸತೋಷ ಪಡ್ತಾನೆ ನೋಡು ಅಂತು! ನಂಗೆ ಯಾಕೋ ಸಿಟ್ಬಂದು ಅವನ್ನ ಕೇಳ್ದೆ! ಅಲ್ಲ  ನಾನು ನಿಮ್ಮ ಬಗ್ಗೆ ತಿಳ್ಕೊಂಡು ನಮ್ಮ ಜನರಿಗೆ ನಿಮ್ಮ ಬಗ್ಗೆ ತಿಳುವಳಿಕೆ ಕೊಡೋಣ ಅಂತ ಬಂದ್ರೆ ನೀವು ನನ್ನ ನೋಡಿ ನಗ್ತಿರ ಅಂತ ಅಂದೆ.ಜೋರಾಗಿ ನಕ್ಕ ಅವು ಹೇಳಿದವು  ಅಲ್ಲ ಕಣಯ್ಯ ನೀವು ಮಾನವರು ನಿಮ್ಮ ಕುಲವನ್ನೇ ನೆಟ್ಟಗೆ ಭೂಮಿಮೇಲೆ ಅರ್ತ ಮಾಡಿಕೊಳ್ಳದೆ ಕಚ್ಚಾಡಿ ಬಡಿದಾಡಿ ಕೊಂಡು ಇದೀರಿ.ನಿಮಗೆ ಒಬ್ಬಬ್ಬರಿಗೂ ವೆತ್ಯಾಸ ಮಾಡಿಕೊಂಡು ಬದುಕುತ್ತ ಇದ್ದೀರಿ,ನಿಮ್ಮಲ್ಲಿ ಭೂಮಿಮೇಲೆ ಕಟ್ಟು ಪಾಡು ಮಾಡಿಕೊಂಡು ದೇಶ ದಿಂದ ದೇಶಕ್ಕೆ ಹೋಗಲು ವೀಸಾ ಕಾನೂನು ,ಮಾಡಿಕೊಂಡು  ಮನುಷ್ಯ ಮನುಷ್ಯ ರಲ್ಲೇ ಭೇದ ಮಾಡಿಕೊಂಡು ಯುದ್ದ, ಬಾಂಬು, ಭಯೋತ್ಪಾದನೆ ,ಎಲ್ಲ ಮಾಡಿಕೊಂಡು ಸಮರಸದ ಜೀವನ ಸಾಗಿಸದೆ ನರಳಡ್ತ ಇದೀರಿ !.ಇನ್ನು ನಿಮಗೆ ನೀವು ಅರ್ಥ ಆಗಿಲ್ಲ ನಮ್ಮನ್ನು ಅರ್ಥ ಮಾಡ್ಕೊಳ್ಳೋದು  ಏನಿದೆ ಹೇಳು !ನಮ್ಮಲ್ಲಿ  ಯಾರು ಎಲ್ಲಿ ಹೋದ್ರು ವೀಸಾ ಕಾನೂನು ಇಲ್ಲ, ನಾವು ಸ್ವತಂತ್ರವಾಗಿ ಭೂಮಿಯಲ್ಲಿ ಎಲ್ಲರೊಡನೆ ಬೆರೆತು ಯಾರಿಗೂ ತೊಂದರೆ ನೀಡದೆ ಜೀವಿಸಿದ್ದೇವೆ. ನೀವು ಎಲ್ಲರಿಗೂ ಕಂಟಕರಾಗಿ ,ಭೂಮಿಗೂ ಭಾರವಾಗಿ ಬಾಳುತಿದ್ದಿರಿ  ಅದಕ್ಕೆ ನಮಗೆ ಜೋರಾಗಿ ನಗೆಯು ಬರುತಿದೆ! ನಮಗೆ ನಿಮ್ಮನ್ನು ನೋಡಿ ನಗೆಯು ಬರುತಿದೆ ಎಂದು  ನನ್ನ ಕ್ಯಾಮರ ಮುದೆ ನಕ್ಕವು!

2 comments:

Sumana said...

Bahala sogasagide :)

V.R.BHAT said...

ಚೆನ್ನಾಗಿದೆ ಸರ್, ಧನ್ಯವಾದಗಳು