Saturday, March 27, 2010

ಮೊಹಮದ್ ರಫಿ ಹಾಡಿದ ಕನ್ನಡ ಶೋಕ ಗೀತೆ !! ನೀನೆಲ್ಲಿ ನಡೆವ�

ಮಹಮದ್ ರಫಿ ಕಂಟಕ್ಕೆ ಸೋಲದ ಸಂಗೀತ ಪ್ರಿಯರು ಯಾರು?? ಈ ಮೇರು ಕಲಾವಿದ ಕನ್ನಡ ದಲ್ಲಿ ಒಂದೇ ಒಂದು ಹಾಡನ್ನು ಒಂದೇ ಬಳ್ಳಿಯ ಹೂಗಳು ಚಿತ್ರದಲ್ಲಿ ಹಾಡಿದ್ದಾರೆ.ಈ ಹಾಡು ಹಾಗು ಸಾಹಿತ್ಯ ಎಂದೆಂದು ಮರೆಯದ ಹಾಡಾಗಿ ಅಮರವಾಗಿ ಉಳಿದಿದೆ.ರಫಿ ಇನ್ನಷ್ಟು ಕನ್ನಡ ಹಾಡುಗಳನ್ನು ಹಾಡಿದ್ದಿದ್ರೆ ಚೆನ್ನಾಗಿತ್ತು ಅಂತ ಯಾರಿಗಾದರೂ ಅನ್ನಿಸುತ್ತೆ.ಈ ಅಮರ ಗಾಯಕ ಎಸ.ಪಿ. ಬಾಲಸುಬ್ರಮಣ್ಯಂ ರವರ ಮೆಚ್ಚಿನ ಗಾಯಕನೂ ಹೌದು, ಗುರುವೂ ಹೌದು. ತಂದೆ ಮಕ್ಕಳು ಚಿತ್ರದ ರಾಧಿಕೆ ನಿನ್ನ ಸರಸವಿದೇನೆ ಹಾಡನ್ನು ಎಸ.ಪಿ.ಬಿ. ರಫಿಯ ರಾಧಿಕೆ ತೂನೇ ಭಾಂಸುರಿ ಚುರಾಯೇ ಎಂಬ ಹಾಡನ್ನು [ ಹಿಂದಿಯ ಬೇಟಿ-ಬೇಟಾ ಚಿತ್ರ] ಮನದಲ್ಲಿ ಇಟ್ಟುಕೊಂಡು ರಫಿಯನ್ತೆಯೇ ಹಾಡಿ ಗುರು ಕಾಣಿಕೆ ನೀಡಿದರು.ಈ ಅಮರ ಗಾಯಕನ ಹಾಡು ಕೇಳಿ ನೆನೆಯೋಣ ಬನ್ನಿ.