Monday, April 12, 2010

ಸಣ್ಣ ಮನಸ್ಸಿನ ದೊಡ್ಡ ಮನುಷ್ಯರು !!! ಇವರಿಗೆ ಬುದ್ದಿ ಹೇಳೋರು ಯಾರು???

 
 
 
Posted by Picasa
ಅಂದು ಹಾಗೆ ನನ್ನ ಕೆಲಸದ ನಿಮಿತ್ತ ಹೊರಟಿದ್ದೆ , ಮೈಸೂರಿನ ಸರಸ್ವತಿಪುರಂ ದಾಟಿ ನನ್ನ ಆಕ್ಟಿವ ಸ್ಕೂಟರ್ ರಾಮಸ್ವಾಮಿ ವೃತ್ತದ ಕಡೆ ಹೊರಟಿತ್ತು !!! ಮುಂದೆ ಒಂದು ಬಿಳಿಬಣ್ಣ ದ ಮಾರುತಿ ಹೋಗುತ್ತಿತ್ತು ಅದರೊಳಗಿಂದ ಒಂದು ಕೈ ದಾರಿ ಉದ್ದಕ್ಕೂ ಸಿಗರೇಟಿನ ಕಿಡಿ ಹಾಗು ಭೂದಿ ಹೊಗೆ ಹರಡಿಕೊಂಡು ಚಲಿಸಿತ್ತು. ಸ್ಕೂಟರಿನಲ್ಲಿದ್ದ ನನ್ನ ಕಣ್ಣಿಗೆ ಕಿಡಿ ಬಂದು ತಗುಲಿ ಸ್ವಲ್ಪ ಉರಿಯಿತು , ಹಾಗೆ ಮುಂದೆ ರಾಮ ಸ್ವಾಮೀ ಸರ್ಕಲ್ ಸಿಗ್ನಲ್ ಹತ್ತಿರ ಈ ಪುಣ್ಯಾತ್ಮನಿಗೆ ಸ್ವಲ್ಪ ಪೂಜೆ ಮಾಡಿದೆ ಅನ್ನಿ !! ಆದ್ರೆ ಆ ಪುಣ್ಯಾತ್ಮನಿಗೆ ಏನು ಅನ್ನಿಸಿದ ಹಾಗೆ ಕಾಣಲಿಲ್ಲ !!! ಹಾಗೆ ನನ್ನ ಮೊಬೈಲ್ ನಿಂದ ಅವನ ಕೈ ಮಾಡಿದ ಕೆಲಸ ಸೆರೆಯಾಗಿತ್ತು . ಇಂತಹ ಸಣ್ಣ ಮನಸ್ಸಿನ ದೊಡ್ಡ ಮನುಷ್ಯರಿಗೆ ತಮ್ಮ ಇಂತಹ ಕ್ರಿಯೆ ಯಿಂದ ಅದರಲ್ಲೂ ವಾಹನ ಚಾಲನೆ ಮಾಡುವಾಗ ಹಿಂದಿನ ದ್ವಿಚಕ್ರ ಸವಾರರಿಗೆ ,ಪಾದ ಚಾರಿಗಳಿಗೆ ಸಿಗರೇಟಿನ ಕಿಡಿ, ಬೂದಿ ಹಾರಿ ಆಗುವ ಹಾನಿಯ ಅರಿವು ಇಲ್ಲದೆ ಇರುವುದು ಶೋಚನೀಯ .ಕೆಲವೊಮ್ಮೆ ವೇಗವಾಗಿ ಬರುವ ಇಂತಹ ಕಿಡಿಗಳು ಕಣ್ಣನ್ನು ಹಾಳು ಮಾಡಬಹುದು ಆದ್ದರಿಂದ ಬ್ಲಾಗಿಗರೇ ನೀವು ಧೂಮಪಾನಿಗಳಾಗಿದ್ದರೆ ದಯಮಾಡಿ ಇವನಂತೆ ದಾರಿ ಉದ್ದಕ್ಕೂ ಹೀಗೆ ಸಿಗರೇಟಿನ ಕಿಡಿ,ಭೂದಿ ಉದುರಿಸಿಕೊಂಡು ಹೋಗಿ ಬೇರೆಯವರ ಕಣ್ಣು ಕೀಳದಿರಿ !!!ಏನಂತಿರಾ ಸ್ವಾಮೀ???

3 comments:

shivu.k said...

ಸರ್,

ಇಂತವರನ್ನು ಕೆಂಡದಂತ ಕೋಪ ಬರುತ್ತದೆ...

ಸಾಗರದಾಚೆಯ ಇಂಚರ said...

ಅನಾಗರಿಕ ಮನುಷ್ಯರು
ಎಷ್ಟು ಹೇಳಿದರೂ ಬುದ್ಧಿ ಬರದು

ಸೀತಾರಾಮ. ಕೆ. / SITARAM.K said...

hididi bhuddhi kalisabeku!!!